ಸಂಸ್ಥೆಯ ಇತಿಹಾಸ
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್)
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು ಬಾಹ್ಯ ಹಣಕಾಸು ನೆರವಿನೊಂದಿಗೆ ರಾಜ್ಯದ ರಸ್ತೆಗಳ ಹಾಗೂ ಹೆದ್ದಾರಿಗಳ ಸಂಪರ್ಕ ಜಾಲದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಪ್ರಥಮ ಪ್ರಾರಂಭಿಕ ಪ್ರಯತ್ನ/ಹೆಜ್ಜೆಯಾಗಿರುತ್ತದೆ.
ರಲ್ಲಿ ಪ್ರಾರಂಭಗೊಂಡಂತಹ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು ಪರಿಣಾಮಕಾರಿತ್ವದಿಂದ ಕೂಡಿದ ನಿರ್ಮಾಣ ಮೇಲ್ವಿಚಾರಣೆ, ಸಮಗ್ರ ಪುನರ್ವಸತಿ ಕ್ರಿಯಾ ಯೋಜನೆ (ಆರ್ ಎ ಪಿ) ಹಾಗೂ ಪರಿಸರ ಮತ್ತು ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆಗಳೊಂದಿಗೆ ರಾಜ್ಯದಲ್ಲಿನ ರಸ್ತೆ ವಲಯ ನಿರ್ಮಾಣದಲ್ಲಿ ಅನೇಕ ಅಂತರ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪರಿಪಾಠಗಳನ್ನು ಪರಿಚಯಿಸಿದೆ.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ - I (ಕೆಶಿಪ್ - I)
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ- I ನ್ನು 2001-2008ರಲ್ಲಿ 360 ದಶಲಕ್ಷ ಯುಎಸ್ ಡಾಲರುಗಳಷ್ಟು ವಿಶ್ವ ಬ್ಯಾಂಕ್ ಹಣಕಾಸಿನ ಸಹಾಯದೊಂದಿಗೆ ರೂ.2390 ಕೋಟಿ ಮೊತ್ತದಷ್ಟು ಯೋಜನಾ ವೆಚ್ಚದಲ್ಲಿ ಕಾರ್ಯಗತಗೊಳಿಸಲಾಯಿತು. 50 ಪ್ಯಾಕೇಜುಗಳಲ್ಲಿ ಹರಡಿಕೊಂಡಿದ್ದಂತಹ 2385 ಕಿಮೀಗಳಷ್ಟು ಒಟ್ಟಾರೆ ಯೋಜನಾ ಉದ್ದವನ್ನು ಅಭಿವೃದ್ಧಿಗೊಳಿಸಲಾಯಿತು. ಅಭಿವೃದ್ಧಿಗೊಳಿಸುವಿಕೆಯು 900 ಕಿಮೀಗಳಷ್ಟು ಉದ್ದದ ರಸ್ತೆಗಳನ್ನು 1 ಮೀಟರ ಅಗಲದ ಸುಸಜ್ಜಿತ ಭುಜ ಹಾಗೂ 1.5 ಮೀಟರುಗಳ ಅಗಲದ ಮಣ್ಣಿನ ಭುಜದೊಂದಿಗೆ (ಅರ್ಧನ್ ಶೌಲ್ಡರ್ಸ್) ದ್ವಿಪಥ/ಜೋಡಿ ಮಾರ್ಗದ ರಸ್ತೆಗಳಿಗೆ ಮೇಲ್ದರ್ಜೆಗೇರಿಸುವುದನ್ನು ಹಾಗೂ 1485 ಕಿಮೀಗಳಷ್ಟು ಉದ್ದದ ರಸ್ತೆಯನ್ನು ಕನಿಷ್ಠ 5.5 ಮೀಟರುಗಳ ಮಧ್ಯಂತರ ಕ್ಯಾರೇಜ್ ವೇ ರಸ್ತೆ ಮಾರ್ಗಗಳನ್ನಾಗಿ ಪುನರ್-ನಿರ್ಮಾಣ ಮಾಡುವುದನ್ನು ಒಳಗೊಂಡಿದ್ದಿತು.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-1ರ ಕಾರ್ಯನಿರ್ವಹಣೆಯು ಜೂನ್ 2005ರಲ್ಲಿ ಕರ್ನಾಟಕದ ಹೂಡಿಕೆ ನೀತಿಯ ಸಮೀಕ್ಷೆಯಲ್ಲಿ ವಿಶ್ವ ಬ್ಯಾಂಕಿನ ಮೆಚ್ಚುಗೆಯನ್ನು ಪಡೆಯಿತು. ವಿಶ್ವ ಬ್ಯಾಂಕ್ - ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-1ರ ಪ್ರಗತಿಯನ್ನು ರಾಷ್ಟ್ರೀಯ ಸರಾಸರಿಗಿಂತ ಬಹಳಷ್ಟು ಅಧಿಕ ಪ್ರಮಾಣದಲ್ಲಿ ಹಾಗೂ ವಿಶ್ವವ್ಯಾಪಿ ಸರಾಸರಿಯ ಸಮನಾಗಿ ನಿರ್ಧಾರಣೆ ಮಾಡಿದ್ದಿತು. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು ಭಾರತದಲ್ಲಿ ಕಾರ್ಯಗತಗೊಳಿಸಲ್ಪಟ್ಟಿರುವಂತಹ 2ನೇ ಅತ್ಯುತ್ತಮ ಮೂಲಸೌಕರ್ಯ ಯೋಜನೆ ಎಂಬುದಾಗಿ ಇಂಡಿಯಾ ಟೆಕ್ ಎಕ್ಸಲೆನ್ಸ್ ಅವಾರ್ಡ್ 2010ನ್ನು ಪಡೆದುಕೊಂಡಿತು ಹಾಗೂ ಅದನ್ನು 27 ಅಕ್ಟೊಬರ್ 2010ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ನೀಡಿದರು.
 |
 |
ಇಂಡಿಯಾ-ಟೆಕ್ ಎಕ್ಸಲೆನ್ಸ್ ಅವಾರ್ಡ್-2010 ಪ್ರಶಸ್ತಿ ಪ್ರದಾನ ಸಮಾರಂಭ - 27 ಅಕ್ಟೋಬರ್ 2020 ರಂದು ಶ್ರೀಮತಿ ಪ್ರತಿಭಾ ಪಾಟೀಲ್, ಗೌರವಾನ್ವಿತ ಭಾರತದ ರಾಷ್ಟ್ರಪತಿಯವರು ಪಿಐಯು- ಕೆಶಿಪ್, ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು |
ಇಂಡಿಯಾ-ಟೆಕ್ ಎಕ್ಸಲೆನ್ಸ್ ಅವಾರ್ಡ್ – 2010 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಬಿ.ಎಚ್. ಅನಿಲ್ ಕುಮಾರ್, ಭಾಆಸೇ, ಮುಖ್ಯ ಯೋಜನಾ ಅಧಿಕಾರಿ, ಕೆಶಿಪ್, ಶ್ರೀ ಎನ್.ಎಲ್.ಆರ್. ಪೇಶ್ವೆ, ಕಾರ್ಯದರ್ಶಿ, ಲೋ.ಇ., ಶ್ರೀ ಕೆ.ಎಸ್. ಕೃಷ್ಣಾ ರೆಡ್ಡಿ, ಯೋಜನಾ ನಿರ್ದೇಶಕರು, ಕೆಶಿಪ್ |
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ – II (ಕೆಶಿಪ್ - II)
ಕೆಶಿಪ್- Iರ ಯಶಸ್ಸಿನ ಉತ್ಸಾಹದಿಂದಾಗಿ, ಕರ್ನಾಟಕ ಸರ್ಕಾರವು 2011-12ರಲ್ಲಿ ಕೆಶಿಪ್ - II ನ್ನು ಕೈಗೆತ್ತಿಕೊಳ್ಳುವ ಮೂಲಕ ತನ್ನ ರಸ್ತೆ ಅಭಿವೃದ್ಧಿ ಪ್ರಾರಂಭಿಕ ಹೆಜ್ಜೆಗಳನ್ನು/ಪ್ರಯತ್ನಗಳನ್ನು ಮುಂದುವರೆಸಿಕೊಂಡು ಹೋಯಿತು. ಕರಾಹೆಅಯೋ- II ನ್ನು (ಅ) ಸುಮಾರು 1195 ಕಿಮೀಗಳಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶ್ವ ಬ್ಯಾಂಕಿನಿಂದ 350 ದಶಲಕ್ಷ ಯುಎಸ್ ಡಾಲರುಗಳಷ್ಟು ಸಾಲದ ನೆರವು ಪಡೆದಕೊಳ್ಳುವ ಮೂಲಕ ಹಾಗೂ (ಆ) ಸುಮಾರು 616 ಕಿಮೀಗಳಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಏಶಿಯನ್ ಅಬಿವೃದ್ಧಿ ಬ್ಯಾಂಕಿನಿಂದ 315 ದಶಲಕ್ಷ ಯುಎಸ್ ಡಾಲರುಗಳಷ್ಟು ಸಾಲದ ನೆರವು ಪಡೆದಕೊಳ್ಳುವ ಮೂಲಕ ಕಾರ್ಯಗತಗೊಳಿಸಲಾಗಿದೆ. ಗುತ್ತಿಗೆಗಳನ್ನು ಐಟಂ ದರ (ಇಪಿಸಿ ಕಾಂಟ್ರಾಕ್ಟ್) ಡಿ ಬಿ ಎಫ್ ಒ ಎಂ ಟಿ (DBFOMT) – (ನಿರ್ಧಿಷ್ಟÖ ವರ್ಷಾಸನ )ಹಾಗೂ ಸಹ-ಹಣಕಾಸು ನೀಡಿಕೆ ಮಾದರಿಗಳ ಮೂಲಕ ಪಡೆದುಕೊಳ್ಳಲಾಯಿತು.
1195 ಕಿಮೀಗಳಷ್ಟು ಉದ್ದ ರಸ್ತೆಯನ್ನು (ಕೆಶಿಪ್ – 834 ಕಿಮೀಗಳು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆ ಆರ್ ಡಿ ಸಿ ಎಲ್) – 361 ಕಿಮೀಗಳು) ವಿಶ್ವ ಬ್ಯಾಂಕ್ ನೆರವಿನೊಂದಿಗೆ ರೂ.4522 ಕೋಟಿ ಮೊತ್ತದಷ್ಟು ಒಟ್ಟಾರೆ ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಗಾಗಿ ಕೈಗೆತ್ತಿಕೊಳ್ಳಲಾಯಿತು. 662 ಕಿಮೀಗಳಷ್ಟು ಉದ್ದದ ರಸ್ತೆಯನ್ನು (ಕೆಶಿಪ್-301 ಕಿಮೀಗಳು ಹಾಗೂ ಕೆ ಆರ್ ಡಿ ಸಿ ಎಲ್ – 361 ಕಿಮೀಗಳು) ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ, 2 ವರ್ಷಗಳ/2.5 ವರ್ಷಗಳ ನಿರ್ಮಾಣದ ಅವಧಿ ಮತ್ತು 8 ವರ್ಷಗಳ/ 7.5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯೂ ಸೇರದಂತೆ (ಒ ಅಂಡ್ ಎಂ) 10 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಕಾರ್ಯಗತಗೊಳಿಸಲಾಗಿದೆ. ಉಳಿಕೆ 533 ಕಿಮೀಗಳನ್ನು ಐಟಂ ದರಗುತ್ತಿಗೆಗಳ ಅಡಿಯಲ್ಲಿ ಒಂದು ವರ್ಷದ ಲೋಪದೋಷ ಹೊಣೆಗಾರಿಕೆ ಅವಧಿಯೊಂದಿಗೆ ಕಾರ್ಯಗತಗೊಳಿಸಲಾಯಿತು. ಸಾಲವನ್ನು 28 ಡಿಸೆಂಬರ್ 2018ರಂದು ಮುಕ್ತಾಯಗೊಳಿಸಲಾಯಿತು ಹಾಗೂ 295.21 ದಶಲಕ್ಷ ಯುಎಸ್ ಡಾಲರಗಳಷ್ಟು ಸಾಲದ ನೆರವನ್ನು ಉಪಯೋಗಿಸಿಕೊಳ್ಳಲಾಯಿತು.
ಹಾಗೂ 616 ಕಿಮೀಗಳಷ್ಟು ಉದ್ದದ ರಸ್ತೆಯನ್ನು ಮತ್ತು 4 ರಸ್ತೆ ಮೇಲು ಸೇತುವೆಗಳ (ಆರ್ ಒ ಬಿ) ನಿರ್ಮಾಣದೊಂದಿಗೆ ಒಟ್ಟಾರೆ ರೂ.2150 ಕೋಟಿ ಮೊತ್ತದಷ್ಟು ಯೋಜನಾ ವೆಚ್ಚದಲ್ಲಿ ಏಶಿಯನ್ ಅಬಿವೃದ್ಧಿ ಬ್ಯಾಂಕಿನಸಾಲದ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಯಿತು ಹಾಗೂ ಐಟಂ ದರ ಗುತ್ತಿಗೆ ಅಡಿಯಲ್ಲಿ ಕಾರ್ಯಗತಗೊಳಿಸಲಾಯಿತು. ಸಾಲವನ್ನು 31 ಅಕ್ಟೋಬರ್ 2018ರಂದು ಮುಕ್ತಾಯಗೊಳಿಸಲಾಯಿತು ಹಾಗೂ 263.2 ದಶಲಕ್ಷ ಯುಎಸ್ ಡಾಲರುಗಳಷ್ಟು ಸಾಲದ ನೆರವನ್ನು ಬಳಸಿಕೊಳ್ಳಲಾಯಿತು.
ವಿಶ್ವ ಬ್ಯಾಂಕಿನ ಸಹಯೋಗದೊಂದಿಗೆ ಏಶಿಯಾ ಖಂಡದಲ್ಲಿ ರಸ್ತೆ ಸುರಕ್ಷತಾ ಉಪಕ್ರಮಗಳಿಗಾಗಿ ಗ್ಲೋಬಲ್ ರೋಡ್ ಸೇಫ್ಟಿ ಫೆಸಿಲಿಟಿ (ಜಿ ಆರ್ ಎಸ್ ಎಫ್) ಯು ಕೆಶಿಪ್ಗೆ ಐ-ಆರ್ ಎ ಪಿ ಅಂತರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತು. ಪ್ರಶಸ್ತಿಯನ್ನು ಮಿ. ಗ್ರೆಗ್ ಸ್ಮಿತ್, ಪ್ರಾದೇಶಿಕ ನಿರ್ದೇಶಕರು, ಅಂತರ ರಾಷ್ಟ್ರೀಯ ರಸ್ತೆ ನಿರ್ಧಾರಣಾ ಕಾರ್ಯಕ್ರಮ (ಐ ಆರ್ ಎ ಪಿ) ಹಾಗೂ ಕರ್ನಾಟಕ ಸರ್ಕಾರದ ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆಯ ಅಂದಿನ ಮಾನ್ಯ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ರವರು ಕೆಶಿಪ್ಗೆ ನೀಡಿದರು.
ಶ್ರೀ. ಕೆ.ಎಸ್. ಕೃಷ್ಣಾ ರೆಡ್ಡಿ, ಮುಖ್ಯ ಯೋಜನಾ ಅಧಿಕಾರಿಯವರು, ಶ್ರೀ. ಎಚ್.ಎಸ್. ಪ್ರಕಾಶ್ ಕುಮಾರ್, ಯೋಜನಾ ನಿರ್ದೇಶಕರು, ಡಾ. ಮಸೂದ್ ಷರೀಫ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಹಾಗೂ ಶ್ರೀಮತಿ.ದೇವಿಕಾ, ಸಹಾಯಕ ಇಂಜಿನಿಯರ್, ಇವರುಗಳನ್ನು ಒಳಗೊಂಡ ಕೆಶಿಪ್ ತಂಡವು ಪ್ರಶಸ್ತಿಯನ್ನು ಸ್ವೀಕರಿಸಿತು. ಪ್ರಶಸ್ತಿಯನ್ನು 5 ಜೂನ್ 2013ರಂದು ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕದಲ್ಲಿ “ರಸ್ತೆ ಸುರಕ್ಷತೆ, ತಾಂತ್ರಿಕತೆ ಮತ್ತು ನಿರ್ವಹಣೆ” ಈ ವಿಷಯದ ಮೇಲಿನ ಅಂತರ ರಾಷ್ಟ್ರೀಯ ಕಾರ್ಯಾಗಾರದಲ್ಲಿ ನೀಡಲಾಯಿತು.

ಡಾ. ಎಚ್.ಸಿ. ಮಹದೇವಪ್ಪ, ಮಾನ್ಯ ಸಚಿವರು, ಲೋಕೋಪಯೋಗಿ, ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಮಿ. ಗ್ರೆಗ್ ಸ್ಮಿತ್, ಪ್ರಾದೇಶಿಕ ನಿರ್ದೇಶಕರು, ಐ ಆರ್ ಎ ಪಿ, ಇವರುಗಳು ಐ ಆರ್ ಎ ಪಿ ಅಂತರ ರಾಷ್ಟ್ರೀಯ ಪ್ರಶಸ್ತಿಯನ್ನು “ ರಸ್ತೆ ಸುರಕ್ಷತೆ ,ತಾಂತ್ರಿಕತೆ ಮತ್ತು ನಿರ್ವಹಣೆ” ಈ ವಿಷಯದ ಮೇಲಿನ ಅಂತರ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಿಐಯು-ಕೆಶಿಪ್ ಗೆ ನೀಡುತ್ತಿರುವುದು.
ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆ - III (ಕೆಶಿಪ್ -III)
ರಸ್ತೆ ಸಾರಿಗೆ ಸಂಪರ್ಕಜಾಲದ ದಕ್ಷತೆಯನ್ನು ಉತ್ತಮಗೊಳಿಸುವಲ್ಲಿನ ಪ್ರಯತ್ನಗಳನ್ನು ಮುಂದುವರೆಸುವ ಒಂದು ಭಾಗವಾಗಿ, ಕರ್ನಾಟಕ ಸರ್ಕಾರವು ಪ್ರಮುಖ ರಸ್ತೆ ಸಂಪರ್ಕಜಾಲದ ಅಭಿವೃದ್ಧಿಗಾಗಿ 346 ದಶಲಕ್ಷ ಯುಎಸ್ ಡಾಲರುಗಳಷ್ಟು ಮೊತ್ತದ ಏಶಿಯಾ ಅಭಿವೃದ್ಧಿ ಬ್ಯಾಂಕಿನ ನೆರವಿನೊಂದಿಗೆ ಕೆಶಿಪ್ - III ನ್ನು ಪ್ರಾರಂಭಿಸಲಾಯಿತು.
ಭೂ ಸ್ವಾಧೀನ ಹಾಗೂ ಇತರೆ ವೆಚ್ಚಗಳೂ ಸೇರಿದಂತೆ ಯೋಜನಾ ವೆಚ್ಚವು ರೂ.5334 ಕೋಟಿ ಆಗಿರುತ್ತದೆ. ಯೋಜನೆಗೆ ಹಣಕಾಸನ್ನು ಹೊಂದಿಸಿಕೊಳ್ಳುವ ಉದ್ದೇಶದಿಂದ ಹಾಗೂ ಖಾಸಗಿ ವಲಯದ ದಕ್ಷತೆಯನ್ನು ಆಕರ್ಷಿಸುವ ಸಲುವಾಗಿ, ಕರ್ನಾಟಕ ಸರ್ಕಾರವು ಕಾರ್ಯಗತಗೊಳಿಸುವಿಕೆಯ ಕಾರ್ಯನೀತಿಯನ್ನು ಸಾರ್ವಜನಿಕ-ಖಾಸಗಿ-ಸಹಭಾಗಿತ್ವ ಮಾದರಿಗೆ ವರ್ಗಾಯಿಸುವಗುತ್ತಿಗೆಗಳು 9 ವರ್ಷಗಳ ಗುತ್ತಿಗೆ ಅವಧಿಯನ್ನು ಹೊಂದಿರುತ್ತವೆ. ಯೋಜನೆಯು ನಿರ್ಮಾಣ ಅನುದಾನದ ಶೇಕಡಾ 75ರಷ್ಟನ್ನು ಏಶಿಯಾ ಅಭಿವೃದ್ಧಿ ಬ್ಯಾಂಕಿನಿಂದ ಪಡೆದುಕೊಳ್ಳುವ ಅರ್ಹತೆಯನ್ನು ಹೊಂದಿರುತ್ತದೆ ಹಾಗೂ ¤¢üðµÀÖ ಅವಧಿಯಲ್ಲಿ ವಾರ್ಷಿಕವಾಗಿ ಮಾಡಬೇಕಾದ ಪಾವತಿಗಳಿಗೆ ಸಂಬಂಧಿತ ವೆಚ್ಚಗಳು, ಕಾರ್ಯಾಚರಣೆ ಮತ್ತು ನಿರ್ವಹಣೆ, ಭೂ ಸ್ವಾಧೀನ, ಉಪಕರಣಗಳ ಸಾಗಣೆ ಇತ್ಯಾದಿ ವೆಚ್ಚವನ್ನು ಕರ್ನಾಟಕ ಸರ್ಕಾರವು ಭರಿಸುತ್ತದೆ. ರಸ್ತೆ ಕಾಮಗಾರಿಗಳನ್ನು 2 ವರ್ಷಗಳ ನಿರ್ಮಾಣ ಅವಧಿ ಹಾಗೂ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಅವಧಿಯೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ. 418.60 ಕಿಮೀಗಳಷ್ಟು ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಮಾದರಿಯ ಅಡಿಯಲ್ಲಿ ಮೂರು ಪ್ಯಾಕೇಜುಗಳಲ್ಲಿ ಅಭಿವೃದ್ಧಿಗಾಗಿ ಕೈಗೆತ್ತಿಕೊಳ್ಳಲಾಗಿದೆ. ನವೆಂಬರ್ 2022 ರ ಅಂತ್ಯಕ್ಕೆ 247.14 ಕಿ.ಮೀ ಡಿಬಿಎಂ ಪದರದವರೆಗೆ ಪೂರ್ಣಗೊಂಡಿದೆ. ಪ್ರಸ್ತುತ ಯೋಜನೆಯು ಅನುಷ್ಠಾನದ ವಿವಿಧ ಹಂತಗಳಲ್ಲಿದೆ.

ಕೆಶಿಪ್- III ಏಷ್ಯನ್ ಅಭಿವೃದ್ಧಿ ಬ್ಯಾಂಕ್ 2ನೇ ಸಾಲಕ್ಕಾಗಿ 30 ಆಗಸ್ಟ್ 2018ರಂದು ಸಹಿ ಮಾಡುತ್ತಿರುವುದು.
ಮಿ. ಕಿನಿಚಿ ಯೋಕೋಯಾಮಾ, ಕಂಟ್ರಿ ಡೈರೆಕ್ಟರ್, ಎ ಡಿ ಬಿ ,ಐ ಎನ್ ಆರ್ ಎಮ್
ಶ್ರೀ. ಸಮೀರ್ ಕುಮಾರ್ ಖರೆ, ಜಂಟಿ ಕಾರ್ಯದರ್ಶಿ (ಎಫ್ ಬಿ ಮತ್ತು ಎ ಡಿ ಬಿ), ಆರ್ಥಿಕ ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ
ಶ್ರೀ. ಅರುಣ್ ಬಜಾಜ್, ಹಿರಿಯ ಸಾರಿಗೆ ತಜ್ಞರು, ಎಡಿಬಿ
ಶ್ರೀ. ನವೀನ್ ರಾಜ್ ಸಿಂಗ್, ಭಾ.ಆ.ಸೇ, ಮುಖ್ಯ ಯೋಜನಾ ಅಧಿಕಾರಿಯವರು, ಪಿಐಯು, ಕರಾಹೆಅಯೋ.
ಕೆಶಿಪ್ ಯೋಜನೆಗಳ ಪಕ್ಷಿನೋಟ
ಯೋಜನೆ
|
ಒಟ್ಟಾರೆ ಉದ್ದ (ಕಿಮೀಗಳು)
|
ಯೋಜನಾ ವೆಚ್ಚ (ರೂ. ಕೋಟಿಯಲ್ಲಿ)
|
ಕಾರ್ಯಗತಗೊಳಿಸುವಿಕೆಯ ಅವಧಿ
|
ಸ್ಥಿತಿಗತಿ
|
ಕೆಶಿಪ್ -I (ವಿಶ್ವ ಬ್ಯಾಂಕ್) (ಸಾಲ ಸಂಖ್ಯೆ 4606-ಐಎನ್)
|
2385
|
2390
|
2001-2008
|
ಪೂರ್ಣಗೊಂಡಿರುವುದು
|
ಕೆಶಿಪ್- II (ವಿಶ್ವ ಬ್ಯಾಂಕ್) ಸಾಲ ಸಂಖ್ಯೆ 8022-ಐಎನ್)
[ಕೆಶಿಪ್-835 ಕಿಮೀಗಳು (ಪರಿಷ್ಕರಿಸಿರುವುದು : 826 ಕಿಮೀಗಳು) ಕೆಆರ್ ಡಿಸಿಎಲ್ – 361 ಕಿಮೀಗಳು]
|
1195
(rev.1185)
|
4522
|
2011-2019
|
ಪೂರ್ಣಗೊಂಡಿರುವುದು
|
ಕೆಶಿಪ್- II (ಏಷ್ಯನ್ ಅಭಿವೃದ್ಧಿ ಬ್ಯಾಂಕ್) ಸಾಲ ಸಂಖ್ಯೆ 2705-ಐ ಎನ್ ಡಿ)
|
616
(rev.614)
|
2150
|
2011-2019
|
ಪೂರ್ಣಗೊಂಡಿರುವುದು
|
ಕೆಶಿಪ್- III (ಏಷ್ಯನ್ ಅಭಿವೃದ್ಧಿ ಬ್ಯಾಂಕ್ 2ನೇ ಸಾಲ) (ಸಾಲ ಸಂಖ್ಯೆ 3619-ಐ ಎನ್ ಡಿ)
|
419
|
5334
|
2018-2024
|
ಅನುಷ್ಠಾನದ ಅಡಿಯಲ್ಲಿರುವುದು.
ನವೆಂಬರ್ 2022 ರ ಅಂತ್ಯಕ್ಕೆ 247.14ಕಿ.ಮೀ ಡಿಬಿಎಂ ಪದರದವರೆಗೆ ಪೂರ್ಣಗೊಂಡಿದೆ.
|
ಒಟ್ಟು
|
4615 (ಪರಿಷ್ಕರಿಸಿರುವುದು : 4603 ಕಿಮೀಗಳು)
|
14396
|
|
|
ಸಾಂಸ್ಥಿಕ ಅಭಿವೃದ್ಧಿಯನ್ನು ಬಲಪಡಿಸುವ ಕ್ರಿಯಾ ಯೋಜನೆ(ಐ ಡಿ ಎಸ್ ಎ ಪಿ)
ಕೆಶಿಪ್ ವತಿಯಿಂದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಲ್ಲದೆಯೇ, ಲೋಕೋಪಯೋಗಿ ಇಲಾಖೆಯೊಳಗೆ ಈ ಕೆಳಕಂಡ ವ್ಯಾಪಕವಾದ ಸುಧಾರಣೆಗಳನ್ನು ಮಾಡಲಾಗಿರುವುದು
- ಇಲಾಖಾ ಸಂಹಿತೆ (Departmental Code) ಪರಿಷ್ಕರಿಸಿರುವುದು
- ಸುಮಾರು 25,000 ಕಿಮೀಗಳಷ್ಟು ಪ್ರಮುಖ ರಸ್ತೆ ಸಂಪರ್ಕಜಾಲವನ್ನು (ಸಿ ಆರ್ ಎನ್) ಗುರುತಿಸಿರುವುದು
- ರಸ್ತೆ ಸುರಕ್ಷತಾ ಕೋಶದಲ್ಲಿ ಸಾಮರ್ಥ್ಯ ನಿರ್ಮಾಣ
- ವಿವಿಧ ಸಹಭಾಗಿಗಳು ತೊಡಗಿಸಿಕೊಂಡಿರುವಂತಹ ಸುರಕ್ಷಿತ ರಸ್ತೆ ಕಾರಿಡಾರುಗಳ ಪ್ರದರ್ಶನಾ ಕಾರ್ಯಕ್ರಮ (ಎಸ್ ಸಿ ಡಿ ಪಿ) .
- ಲೋಕೋಪಯೋಗಿ ಇಲಾಖೆಯ ಕಚೇರಿಗಳಿಗೆ ಐ ಎಸ್ ಒ 9001:2008 ಮತ್ತು ಐ ಎಸ್ ಒ 14001:2004 ಪ್ರಮಾಣಪತ್ರಗಳನ್ನು ಒದಗಿಸಿಕೊಡುವುದು.
- ಪೂರ್ವಭಾವಿ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರದ (ಪಿ ಆರ್ ಎ ಎಂ ಸಿ) ಸ್ಥಾಪನೆ
- ಆಡಳಿತ ಮತ್ತು ಉತ್ತರದಾಯಿತ್ವ ಕ್ರಿಯಾ ಯೋಜನೆ (ಜಿ ಎ ಎ ಪಿ), ದೂರುಗಳನ್ನು ನಿರ್ವಹಿಸುವ ವ್ಯವಸ್ಥೆ (ಸಿ ಎಚ್ ಎಂ), ಸಾರ್ವಜನಿಕರಿಗಾಗಿ ಪ್ರತಿಕ್ರಿಯಾ ಕೇಂದ್ರ (ಪಿ ಆರ್ ಸಿ)
- ಲೋಕೋಪಯೋಗಿ ಇಲಾಖೆಗಾಗಿ ಐಟಿ-ಐಸಿಟಿ-ಎಂಐಎಸ್ ಆರ್ಕಿಟೆಕ್ಚರ್ ಮತ್ತು ಸಾಮರ್ಥ್ಯ ನಿರ್ಮಾಣಕ್ಕಾಗಿ ಚಾತುರ್ಯತೆಯಿಂದ ಕೂಡಿದ ಅಧ್ಯಯನ
- ಗುಣಮಟ್ಟದ ನಿರ್ವಹಣೆ ಮತ್ತು ಗುಣಮಟ್ಟ ನಿಯಂತ್ರಣ ಸಾಮರ್ಥ್ಯದ ವರ್ಧನೆ
- ಯೋಜನಾ ನಿರ್ವಹಣಾ ತಂತ್ರಾಂಶ (ಪಿ ಎಂ ಎಸ್)
- ಮಾನವ ಸಂಪನ್ಮೂಲ ಅಭಿವೃದ್ಧಿ, ಇ-ಕಲಿಕೆ ಮತ್ತು ತರಬೇತಿ.